ಅಶಾಂತ ಮನಸ್ಸು Poem by PRAVEEN KUMAR Kannada Poems

ಅಶಾಂತ ಮನಸ್ಸು

ಮನೋಸಾಗರದ ಸ್ತಬ್ಧ ನೀರಿನಡಿಯಲ್ಲಿ
ನಡೆಯುತ್ತಿದೆ ಭೀಕರ ಬಲಾಬಲ ತಿಕ್ಕಾಟ,
ಬಲಾಹದಾಳದಲ್ಲೆದ್ದಿದೆ ಬೆಂಕಿಯಾಸ್ಫೋಟ;
ತೀರಲಾರದ ಹಸಿವಲ್ಲಿ, ಕಡಿವಾಣ ಕಡಿದ ಸ್ವಾತಂತ್ರದಲಿ,
ಬಾು ಬಿಚ್ಚಿವೆ ದೈತ್ಯ ಮೊಸಳೆ, ತಿಮಿಂಗಲ, ಮೀನು,
ಅಸಹಾಯ ಪುಟ್ಟಜೀವಿಗಳು ಜೀವಭಯದಲ್ಲಿ
ಹಸಿದ ಬಾಯೊಳಗೆ ನುಗ್ಗಿ ಹಿಂಗಿಸಿದ ಹಸಿವು.

ನೋಡಿದಲ್ಲೆಲ್ಲ ಅನಿರ್ಬಂಧ ಅನಾಗರಿಕ ಅಸ್ಪೊಟ
ಯಾಕೆ ಯಾಕೆ ಕವಿದಿದೆ ಚೈತನ್ಯದ ಜೀವನ?
ಬಿಚ್ಚಿಹೋಗಿವೆ ಗೂಟ, ಹಗ್ಗ, ಮೂಗುದಾರ,
ಯಾಕೀ ಹುಚ್ಚಾಟ, ವ್ಯರ್ಥನರ್ಥನಿರ್ಬಂಧನ?

ತಳಕ್ಕಿಳಿದರೆ ಅಲ್ಲಿ ಹಸಿವು, ನೋವಿನ ಬುಗ್ಗೆ,
ಎಲುಬು ಕಡಿಯುವ ನಿರಾಶೆಯ ಬೆಂಕಿ
ಹಬ್ಬಿಸಿದೆ ಮೃತ್ಯುಸುಳಿ, ಹಳಿತಪ್ಪಿದೆ ಲೋಕ,
ಈಜಿ ದಡ ಸೇರುವಸಾಧ್ಯ, ಹಂಬಲದ ಹಂಬಲ,
ಮುತ್ತುರತ್ನಗಳಾಶೆ, ನೀರಸಮಾಧಿಯ ಭಯ,
ನಡುವೆ ತತ್ತರಿಸಿದೆ ನಿಸ್ಪøಹತೆ ಮರೆತಶಾಂತ ಲೋಕ.

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success