ಕವನ ಹೇಗಿರಬೇಕು?
ಕವನ ಹವನ ಮಾಡಿದಂತಿರಬೇಕು,
ಹವಿಸ್ಸುಗಳು ಹೋಮಕುಂಡಕ್ಕೆ ಬಿದ್ದು,
ಅಮೂರ್ತಧೂಮವಾಗಿ ಆಕಾಶಕ್ಕೇರಬೇಕು,
...
ಈ ಮನೋಹರ ಲೋಕವು, ನಿನ್ನ ಕುಸುರಿನ ಕುಶಲ ಕೆಲಸ,
ನಿನ್ನ ಸಿದ್ಧಿ, ಶಕ್ತಿಗಳತ್ಯುನ್ನತ ಪರಿಪೂರ್ಣ ಪರಿಪಾಕ;
ನಿನ್ನನ್ನೆ ತುಂಬಿ, ನೀ ಸಿದ್ಧಗೊಳಿಸಿದ, ನಿನ್ನ ಪ್ರತಿಬಿಂಬ;
ನೀನೋ ಅಚ್ಯುತ, ಅಸ್ಖ್ನಲಿತ, ದೋಷರಹಿತ, ಪರಿಪೂರ್ಣ,
...
ಬುದ್ಧ, ಮಹಾಸಿದ್ಧ,
ಹೀಗೋ ಸಂಸಾರ ಕೂಪಕ್ಕೆ ಬಿದ್ದಿದ್ದ;
ಬಿದ್ದಲ್ಲಿಂದ ಮೇಲೆದ್ದ,
ವಾಸನೆಗಳ ಗೆದ್ದ,
...
ಅವಳು ಬಂದು ನನ್ನನೆಚ್ಚರಿಸಿದಾಗಲೆ, ನನಗೆ ಗೊತ್ತು,
ನಾನಿಲ್ಲಿದ್ದೇನೆ, ಹೀಗಿದ್ದೇನೆ ಎಂದು;
ಅವಳು ಬಂದು, ಕಿವಿಯಲ್ಲಿ ಪಿಸುಗುಟ್ಟಿದಾಗಲೆ ಗೊತ್ತು,
ಹೊತ್ತು ಕಳೆದು, ಬೆಳಕು ಮೇಲೇರಿದೆ ಎಂದು.
...
ಸಾಗರದ ನೀರನ್ನು ಎಳೆ ಬೊಗಸೆಗಳಿಂದ ಎತ್ತೆತ್ತಿ ಕುಡಿದು
ಸಾಗರದ ಮೂಲ ಕಂಡೆನೆನುವಷ್ಟೆ ನನ್ನ ಲೋಕದನುಭವದಾಳ,
ನಾನು ಮುಗಿಯದ ಲೋಕಜ್ಞಾನದ ಮಧ್ಯೆ ಹರಿದಾಡುವ ಕ್ಷುದ್ರ ಹುಳ,
ತಿಂದದಷ್ಟನ್ನೆ ಹೊರಹಾಕುವ ಎರೆಹುಳ, ಸೀಮಿತ ಪರಿಜ್ಞಾನವೆನ್ನದು.
...
ಹೇಳದೆಯೆ, ಕೇಳದೆಯೆ, ಬರುವವಳು ನೀನು,
ಮಲಗಿದ್ದ ನಮ್ಮನ್ನು, ಎಚ್ಚರಿಸಿದವಳು;
ಮಾಗಿಯ ಚಳಿಯೆಂದು, ಒಳಗೊಳಗಡಗಿದ್ದ ನಮ್ಮ,
ವಸಂತ ಇದುಯೆಂದು, ವಾಸ್ತವಿಕಕೆ ತಂದು,
...
ನೀನು ಕರೆದರೆ, ಬರುವವರು,
ನೀ ನೂಕಿದರೆ, ಕುಣಿದೋಡುವವರು,
ನೀನಾಡಿಸಿದಂತೆ, ಕ್ಷಣ ಕ್ಷಣ ಆಡುವವರು ನಾವು.
ಕಾಲಾಯ ತಸ್ಮೈ ನಮ:
...
ಕಣ್ಣುಕಟ್ಟಿರುವ, ಕತ್ತಲೆಯ ಮಬ್ಬನ್ನು ಹರಿದು,
ದೂರ ದಿಗಂತದ ಮರೆಯಿಂದ, ಬೆಳಕು ಹರಿದು,
ಹೊಸ ಚೇತನದ, ಹೊಸ ಆಕಾಂಕ್ಷೆಗಳ, ಅರುಣೋದಯವಾಗಬೇಕು;
ಶಿಥಿಲಗೊಂಡಿರುವ, ಧೈರ್ಯೋತ್ಸಾಹಗಳ ಪುನರುಜ್ಜೀವನಕ್ಕಾಗಿ,
...
ಕಾಮನ ಬಿಲ್ಲಿನ ತೊಟ್ಟಿಲಿನಲ್ಲಿ,
ತಂಬೆಲರಿನ ಹಿತಕರ ಸ್ಪರ್ಶದಲ್ಲಿ,
ತಣ್ಗದಿರಿನ ಮುಸುಕಿನ ಅಮೂರ್ತತೆ ಹೊದಿದು,
ಮಲಗಿದ ಸುಂದರಿ, ಕವಿಗಳ ರಾಣಿ.
...
ಹುಟ್ಟು ಸಾವಿನ ಮಧ್ಯೆ ಬದುಕು ಬೆಳಕಿರುವಾಗ.
ನಮ್ಮೊಳಗೆ ನಮ್ಲೆಲ್ಲ ಸುಖಶಾಂತಿ ತೃಪ್ತಿಯಿರುವಾಗ,
ದಟ್ಟ ಕತ್ತಲಲಿ ಮುಖಮುಚ್ಚುವ ಹುಚ್ಚುಹಂಬಲ ನಮಗೇಕೆ?
ಹೊರಗದ್ದಲದಲ್ಲಿ ಸುಖ ಹುಡುಕುವ ಹುಂಬತನ ನಮಗೇಕೆ?
...
ಅಖಿಲಾಂಡ, ಬ್ರಹ್ಮಾಂಡವನ್ನೆಲ್ಲ ಬೆಳಗಿಸುವ ಬೆಳಕೆ,
ಬಂದೆನ್ನ ಬುದ್ಧಿ ಹೃದಯಕ್ಕೆ, ಹಿತ ಬೆಳಕು ನೀಡು;
ಕತ್ತಲಡರಿದ ಶೂನ್ಯಾಕಾಶದ ಜೀವಾಧಾರ ಬೆಳಕೆ,
ನನ್ನೊಳಗೆ ಹಬ್ಬಿದ ಕತ್ತಲೆಗಂತಿಮ ತೆರೆ ಇಳಿಸು.
...
ಬೆಳಕಿಗೆ ಬೆಳಕಾಗಿ ಬಂದವರು ನಾವು,
ಬೆಳಕಿಗೆ ಶುಭ್ರ ಬೆಳಕಾಗಬೇಕು;
ಕತ್ತಲನು ಬಗೆದೊಗೆದು ಬೆಳಕಾದವರು ನಾವು,
ಕತ್ತಲಿನ ಮುಖವೊರಸಿ ಬೆಳಕು ಹರಿಸಬೇಕು.
...
ದಪ್ಪ ತೊಗಲಿನ ಎಮ್ಮೆ, ನಮ್ಮ ಸರಕಾರ,
ಹೊಡೆದರೂ, ಬಡೆದರೂ, ಎದ್ದೇಳದಂತಹ ಭಾರ;
ದೂಡಿದರೂ, ನೂಕಿದರೂ, ಬಿಡದ ಹೊಲಸಿನ ನಂಟು,
ಮುಟ್ಟಿದರೆ, ಕೈ ಹತ್ತುವ, ಮೈ ತುಂಬ ಅಂಟು;
...
ಅವನು, ತುಂಬ ತುಂಟ,
ನಿಮಿಷ ಒಂದು ಸುಮ್ಮನಿರಲಾರ;
ನೋಡಿದ್ದರ ಮೇಲೇರಬೇಕು,
ಕಂಡದ್ದರ ಬಾಗಿಲು ತೆರೆಯಬೇಕು,
...
ಹೆಗ್ಗಣ, ಗೂಬೆ, ನರಿ, ತೋಳಗಳ,
ಓತಿ, ಕೋತಿ, ಕಾಗೆ, ರಣಹದ್ದುಗಳ,
ಸ್ಪರ್ಧೆ, ಹೋರಾಟಗಳ, ಕರ್ಮಭೂಮಿಯಯ್ಯ;
ರಾಜಕೀಯವು, ಹಗ್ಗ ಜಗ್ಗಾಟದ,
...
ನೋಡುನೋಡುತಿದ್ದಂತೆ, ಆ ದಡದಿಂದ, ಈ ದಡವ ಸೇರಿ ಬಿಟ್ಟೆ,
ನೋಡುನೋಡುತಿದ್ದಂತೆ, ಅಲೆಗಳನೇರಿ, ಇಳಿದು, ದೂರ ಕ್ರಮಿಸಿಬಿಟ್ಟೆ;
ಪ್ರಾತ: ಕಾಲದ ಎಳೆಬಿಸಿಲಲ್ಲಿ ಹೊರಟವನು,
ನಡು ಬಿಸಿಲಲ್ಲಿ, ಬೆವರು ಸೋತು ಬಸವಳಿದು,
...
ಬೆಂಕಿಯ ನಡುವಲಿ ಬಿದ್ದು, ಕರಗುವ ವರೆಗೆ,
ಕರಗಿ, ಕೆಳಹರಿದು, ತಳದಲ್ಲಿ ಕೂಡುವವರೆಗೆ,
ಕಲ್ಮಶಗಳ ಹೊರಕೊಟ್ಟು, ತಾನಾಗಿ ಥಳಥಳ ಹೊಳೆಯುವವರೆಗೆ,
ಯಾವುದು ಚಿನ್ನ?
...
ಬರಬೇಕಾದಾಗ, ಮುಚ್ಚಿದ್ದ ಬಾಗಿಲನು ಒಡೆದು,
ಹಾರಿ, ಕುಣಿದು, ಕುಪ್ಪಳಿಸಿ, ಭೋರ್ಗರೆದು ಬರುವವಳು ನೀನು;
ಬರಬೇಕಾದಾಗ, ಚಿತ್ತಭಿತ್ತಿಯ ರಂಧ್ರ ರಂಧ್ರದಿ ಸಿಡಿದು,
ಧಾರಾಕಾರ ಮಡುಕಟ್ಟಿ, ಹೊರ ಹರಿಯುವವಳು.
...
ಎಲ್ಲಿ ನೋಡಿದರಲ್ಲಿ ಸ್ಠೃಷ್ಠಿಯ,
ಪುಂಖಾನುಪುಂಖ, ಸಂದೇಶ ವ್ಠೃಷ್ಠಿ;
ನಿಸರ್ಗಗರ್ಭದಾಳದಿಂದ,
ವ್ಯೋಮಮಾರ್ಗದೌನ್ನತ್ಯದಿಂದ,
...
Praveen Kumar, a bilingual poet, born in Mangaluru on June 29 of 1949 as the eldest son of Shree R.D.Suvarna and Smt. B.Sarojini, with his more than three decades of government service as a senior police officer and as a poet of twenty-four published collections and as an author of five volumes on matters of governance and administration is a familiar face in Indian intellectual circuits. His more than 30 contributions on governance and administration to prominent national dailies like The Hindu, The Indian Express, Deccan Herald and The Times of India and other periodicals and journals were extremely popular and often sensational by their innovative unorthodox thoughts. Praveen Kumar graduated in Science from St. Aloysius College, Mangaluru, going on to obtain post-graduate degree in Literature from Mysuru University. He also holds post-graduate diploma in Business Management as well as Higher Diploma in Cooperative Management. In his student days he was a prize-winning orator and writer. He lives in Bengaluru with his son, Pratheek Praveen Kumar and wife, Jayashree Praveen Kumar. He is a familiar face in national seminars and TV networks in India as a Poet and thinker and some of his poems have figured in school text books. His published works include Policing for the New Age, Policing the Police, Indian Police and Inside India in prose; and Unknown Horizons, Portraits of Passion, Simply Yours, Love & Pride, Shobha Priya, Golden Wonder and Celestial Glow in poetry. His published works in Kannada are Divya Belaku, Bhavana, Priya Chaitra Tapasvini, Ananya Priya Lavanya, Priya Geethegalu and Tapasvini. Stemming from his varied academic background are the lively far-reaching interests that have impelled him to write in subjects as divers as matters of public interest and poetry that struck a perfect balance between the pursuance of vocation and avocation.)
ಕವನ ಹೇಗಿರಬೇಕು?
ಕವನ ಹೇಗಿರಬೇಕು?
ಕವನ ಹವನ ಮಾಡಿದಂತಿರಬೇಕು,
ಹವಿಸ್ಸುಗಳು ಹೋಮಕುಂಡಕ್ಕೆ ಬಿದ್ದು,
ಅಮೂರ್ತಧೂಮವಾಗಿ ಆಕಾಶಕ್ಕೇರಬೇಕು,
ಹೊಸ, ಹೊಸ ಬಣ್ಣ ಚಿತ್ತಾರಗಳ ಕೊಟ್ಟು,
ಕಂಡವರ ಕಲ್ಪನೆಯ ಕೆರಳಿಸುವಂತಿರಬೇಕು,
ಪರಿಸರದಲ್ಲಿ ಪ್ರಜ್ಞೆ ಉದ್ದೀಪನಗೊಳಿಸಿ,
ಹೊಸ ಭಾವಾರ್ಥ ಸೃಷ್ಠಿ ವೃಷ್ಠಿ ಹರಿಸಬೇಕು;
ಒಳಗೆ ಹರಡಿರುವ ಜೇಡರ ಬಲೆಗಳ ಹರಿದು,
ಹೊಸಗಾಳಿ, ಬೆಳಕು, ತೃಪ್ತಸ್ಥಿತಿ ತಂದುಕೊಡಬೇಕು;
ಹೀಗಿರಬೇಕು ಕವನ,
ಇದು ಆತ್ಮದಂತರಾಳದ ಹವನ.
ಕವನ ಹೇಗಿರಬೇಕು?
ಕವನ ಯವ್ವನದ ಆವರ್ತದಂತಿರಬೇಕು;
ಮಡುವಿನ ನಡುವಿನಲಿ ಬಿದ್ದ ಭಾವಧ್ಯಾನ,
ಸುಳಿಸುಳಿಯಾಗಿ, ಸುತ್ತಿ, ಹಬ್ಬಿ ಹರಿಯಬೇಕು;
ಹೊಸ ರೋಷ, ಹೊಸ ದೃಷ್ಠಿ, ಒಳಗೊಳಗೆ ಮೂಡಿಸಬೇಕು;
ಒಳಗೆ ಹುಳಿಸಿ, ಹೊರಗೆ ದಬ್ಬಿ ಸ್ಫುರಿಸಬೇಕು;
ಹೊಸ ಚೇತನ, ಹೊಸ ಸ್ಫಂದನ, ಹೊಸಾಸ್ವಾದನೆ ಕೂಡಿ,
ಒರಟು ಲೋಕದ ಮಧ್ಯೆ, ಬಣ್ಣಮಯ ಲೋಕ ಮೂಡಿತರಬೇಕು;
ಇಹಪರ ಭವಿಷ್ಯತ್ತನ್ನು ಕೂಡಿಸಿ ಮುಂದಿಟ್ಟು,
ನಿಂತಲ್ಲಿ ನಿಲ್ಲಲು ಬಿಡದೆ, ಪೀಡಿಸಿ ಮುಂದೊತ್ತಬೇಕು;
ಹೀಗಿರಬೇಕು ಕವನ,
ಕವನ, ಯವ್ವನದಂತರಾಳದ ಧ್ಯಾನ.
ಕವನ ಹೇಗಿರಬೇಕು?
ಕವನ ಲವಣದ ರುಚಿಯಂತಿರಬೇಕು;
ಸಪ್ಪೆ ಜೀವನಕ್ಕೆ ತರತರ ರುಚಿ ಕೊಟ್ಟು,
ಅನುಭವಿಸಿದಕ್ಕೆಲ್ಲ ಹೊಸರೂಪ ಕೊಡಬೇಕು;
ಎದುರಾದದಕ್ಕೆಲ್ಲ, ಹೊಸಾರ್ಥ, ಮನೋಹರತೆ ಕೊಟ್ಟು,
ಮತ್ತೆ ಮತ್ತೆ ಬೇಕೆನಿಸುವ ಬಯಕೆ ತಂದೀಯಬೇಕು;
ಕವನ, ದ್ಠೃಕೋನ ಬದಲಿಸಬೇಕು,
ಕಣ್ಣಿಗೆ ಕಾಣದ ಹೊಸತನ ಸ್ಠೃಸಬೇಕು;
ನೆಲದ ಮೇಲಿದ್ದವರನ್ನು ಮೇಲೆ ಮೇಲೆತ್ತಿ ಕುಣಿಸಿ,
ಬದುಕು ಸಂಭ್ರಮವನ್ನು ಬಿಚ್ಚಿ ತೋರಿಸಬೇಕು;
ಹೀಗಿರಬೇಕು ಕವನ,
ಕವನ ಬೇಸತ್ತ ಹೃದಯಕ್ಕೆ ಭಾವಪೂರ್ಣ ಲವಣ.