Praveen Kumar in Bhavana

Praveen Kumar in Bhavana Poems

ದಿಗಂತದಾದ್ಯಂತದ ಕಪ್ಪು ಹಾಸಿನ ಮೇಲೆ
ಮೂಡಣದಂಚಿನಲ್ಲಿ ಬೆಳಕಿನ ಕಿಂಡಿಯೊಂದು
ಹಸುನಗುವನ್ನು ಚೆಲ್ಲುವ ಪರಿ ನೋಡೆ, ಚೆನ್ನೆ;
ಹಸುನಗು ಅರಳಿ ಮುದವರಳಿ ನಾಡಿನ ತುಂಬ
...

ನೀನೆಷ್ಟು ದೂರ ಹೋದರೇನು,
ಕೊನೆಗೊಂದು ದಿನ ನೀನು ಬರಲೆ ಬೇಕು,
ಬಂದೊಂದು ದಿನ ನನ್ನ ಸೇರಲೆ ಬೇಕು;
ನೀನೆಲ್ಲಿ ಗುಪ್ತಗಮನದಿಂದ
...

ಅವಳು ಅಂತಿಂತವಳಲ್ಲ,
ಸಾಕ್ಷಾತ್ ಶಾರದೆ, ವಿದ್ಯಾಲಂಕೃತೆ,
ಹೆಜ್ಜೆಹೆಜ್ಜೆಯಲೂ ನೈಜ್ಯ ಲಜ್ಜೆ,
ತಲೆಯೆತ್ತಿ ಸ್ವರವೆತ್ತಿ ನುಡಿದವಳಲ್ಲ,
...

ಯಾಕೀ ಕಲಹ, ಕೋಲಾಹಲ,
ಯಾಕೀ ಸ್ವಾರ್ಥ ಹಾಲಾಹಲ,
ಯಾಕೀ ದ್ವೇಶ ಹಠಸಾಧನೆ;
ಯಾರೂ ಕೊಂಡುಹೋದವರಿಲ್ಲ,
...

ಕಾವ್ಯಕ್ಕೆ ನವ್ಯ ನವೋದಯ ದಲಿತ
ಶಾಸ್ತ್ರೀಯ ಎಡಬಲ ಬೇಧವೇಕೆ?
ಕಾವ್ಯ ರಸಿಕ ಸತ್ಯಾನ್ವೇಷಣೆಯಲ್ಲಿ
ಮತೀಯ ಜಾತ್ಯತೀತ ಪಂಥ ಬೇಕೆ?
...

ನಾನೆಷ್ಟು ಹಾತೊರೆದರೂ
ಕೂಗಿ ಕರೆದರೂ
ನೀ ಬರಲಾರೆ ಚಿನ್ನ,
ನೀನೆಷ್ಟು ಬಯಸಿದರೂ
...

ಎಷ್ಟು ದೂರ ನಡೆದರೇನು,
ಎಷ್ಟು ಬಾರಿ ಕರೆದರೇನು,
ನಮ್ಮ ದಾರಿ ಕೂಡದಾಗ,
ನಮ್ಮ ಹಾಡು ಹಾಡದಾಗ,
...

ಹಾದಿ ಸುಗಮವಿರುವಾಗ,
ರತ್ನಗಂಬಳಿ ಹಾಸಿರುವಾಗ,
ಎದುರಿರುವ ದಾರಿಯಲಿ ನಡೆವುದೆ ಜಾಣತನ;
ಇಲ್ಲಸಲ್ಲದ ಕಾರಣದಿಂದ
...

ಹಕ್ಕಿ ದೂರ ಹಾರಿತು,
ತನ್ನ ಗೂಡು ಸೇರಿತು,
ಅನ್ನವಿಟ್ಟು ಬೆನ್ನು ಸವರಿದ
ನನ್ನ ಕೈಯ ಕೊಡವಿಬಿಟ್ಟು
...

ನಿನ್ನ ಅಪರಾವತಾರ
ನನ್ನ ಗೌಣ ಕಣ್ಣಿಗೆ ಮಿಗಿಲು,
ನಿನ್ನ ನಡವಳಿಕೆಯಿಂದ
ನನಗೇನೋ ತಿಳಿಯದ ದಿಗಿಲು;
...

ನೀನೆಲ್ಲಿದ್ದರು,
ಹೇಗಿದ್ದರು,
ಸುಖವಾಗಿದ್ದರೆ ಸಾಕು;
ನೀನಾರಾಗಿದ್ದರು,
...

ತಾಳತಪ್ಪಿದ ಲೋಕದಲ್ಲಿ
ಥಕ ಥೈ ಥಕ ಥೈ ನಾನೂ ತಾಳಹಾಕಿದೆನಲ್ಲ,
ಬಿದ್ದರೂ ಎದ್ದು ಕೈಹಿಡಿದು
ನಿನಗೆ ಇಂಬು ನೀಡಿದೆನಲ್ಲ.
...

ದಶಮಾನದ ಗುಂಟ ಹೊಸೆದ ಹುರಿಹಗ್ಗ
ಮೆಲ್ಲಮೆಲ್ಲನೆ ಬಿಗಿತ ಬಿಚ್ಚುತ ಈಗ
ನೂಲಿನ ಎಳೆಗಳ ನಡುವೆ ನಿಂತಿದೆ ನೋಡು,
ಯಾವ ಕ್ಷಣ ಕಡಿಯುವುದೋ ನಮ್ಮ ನಂಟು.
...

ಪ್ರಾಕ್ತನ ಸಂಸ್ಕತಿ ಬುನಾದಿ ಭಾರತ
ಸತ್ಯದ ದರ್ಶನ ಹರಿಸಿದೆ ಅವಿರತ,
ಅಹಿಂಸೆ, ಶಾಚಿತಿಯ ಧೋರಣೆಯಿಂದ,
ಹಿಮಾಲಯ ಸಂಯಮ ದಾರಿಯಿಂದ,
...

ಶಿಸ್ತು ಶಾಸ್ತ್ರದ ಶಿಷ್ಯವೃತ್ತಿಗೆ ತನ್ನಕೊಟ್ಟು,
ಹೃದಯ ಗುರುವಿನ ಶಿಕ್ಷೆಗೆ ತಲೆಕೊಟ್ಟು,
ಬಯಲುದಾರಿಯುದ್ದ ಮುನ್ನಡೆಯ ಕಕ್ಷೆ ವಿಧಿಸಿಟ್ಟು
ನಡೆದರೆ ಶಿಸ್ತು ಮುನ್ನಡೆಸುವುದು ಕೈಹಿಡಿದು.
...

ನಿನ್ನ ಸಾರ್ವಭೌಮತ್ವಕ್ಕೆ, ತಲೆವಾಗಿ,
ನಿನ್ನ ಲೋಕದಲಿ, ಬೇರು ಬಿಟ್ಟಿರುವ ನಮಗೆ,
ನಿನ್ನ ನೀತಿ ನಿಯಮಗಳ ಪರಜ್ಞಾನ ನೀಡು;
ಎಲ್ಲಿ, ಏನು, ಹೇಗೆಂದು,
...

ಸಮರಸ ತರುವ ಸಂಗೀತದ ಧಾರೆ
ಹೃದಯ ಸ್ಪಂದಿಸುವ ಆತ್ಮ ಸಂಗಾತಿ,
ಮಧುರತೆ ಚಿಗುರುವ ನಿಸರ್ಗದ ಮೋಡಿ,
ಅಲೆ ಅಲೆಯಾಗಿ ಮನಸ್ಸನು ಬೆಸೆದು
...

ಸುಳಿ ಗಾಳಿಗೆ ಸಿಲುಕಿದ ಒಣ ಹುಲ್ಲಿನಂತೆ
ಎಲ್ಲೋ ನಿರ್ವಾತದಾಗುಂತಕದ ಮಧ್ಯೆ
ಎಲ್ಲಿ ಮುಟ್ಟಬೇಕೆಂಬ ಗೊಡವೆಯ ಕಳೆದು,
ಎಡಬಲ ಮೇಲೆಕೆಳಗೆನೋ ಹಿಂದೆಮುಂದೆ
...

ಅಮೃತವೆಂಬಲ್ಲಿ ಅಮೃತವುಂಟು,
ಸುಖದಿನಗಳ ವಿಜಯದ ಚಿನ್ನದ ಗಂಟು;
ಅಮೃತವೆಂಬಲ್ಲಿ ಅಮೃತವುಂಟು,
ಕುದುರೆಯೇರಿ ಬರಲಿದೆ ಬಯಸಿದ ನಂಟು.
...

ಜೀವ ಪಣವಾಗಿಟ್ಟುನಾ ನಿನ್ನ ಹಿಂದೆ ಬಿದ್ದೆ,
ನೀನೆನ್ನ ಇಹಪರವೆನ್ನದೆ ಇದ್ದುದನ್ನೆಲ್ಲ ಕದ್ದೆ;
ಅದು ನಿನ್ನ ಹಕ್ಕೆಂದು ನಾನೂ ಸುಮ್ಮನಿದ್ದೆ,
ನೋಡಿಲ್ಲಿ ನಾನೀಗ ನಿರ್ವಾತದಲಿ ಸಿಕ್ಕಿಬಿದ್ದೆ.
...

Praveen Kumar in Bhavana Biography

Praveen Kumar with his more than three decades of government service at senior levels and as a poet of seventeen published collections and as an author of six volumes on matters of governance and administration is a familiar face in Indian intellectual circuits. His more than 30 contributions on governance and administration to prominent national dailies like The Hindu, Indian Express, Deccan Herald and Times of India and other periodicals and journals were extremely popular and often sensational by their innovative unorthodox thoughts. He retired from Government Service as a Senior Police Officer after 31 years of service that covered assignments as Director of Food and Civil Supplies Enforcement, Deputy Commissioner of Bangalore City, State Intelligence in charge of Foreigners, Coastal Security Police and various assignments in CID inter alia. Born in Mangalore as the eldest son of Shree R.D.Suvarna and Smt. B.Sarojini, Praveen Kumar graduated in Science from St. Aloysius College, Mangalore, going on to obtain post-graduate degree in Literature from Mysore University. He also holds post-graduate diploma in Business Management as well as Higher Diploma in Cooperative Management. He also attended six advanced courses at the National Police Academy, Hyderabad. His Poem, 'Justice' figures in Karnataka IX Standard Second Language English Text Book from the 2013-14 Academic Year.)

The Best Poem Of Praveen Kumar in Bhavana

ಸೂರ್ಯೋದಯ

ದಿಗಂತದಾದ್ಯಂತದ ಕಪ್ಪು ಹಾಸಿನ ಮೇಲೆ
ಮೂಡಣದಂಚಿನಲ್ಲಿ ಬೆಳಕಿನ ಕಿಂಡಿಯೊಂದು
ಹಸುನಗುವನ್ನು ಚೆಲ್ಲುವ ಪರಿ ನೋಡೆ, ಚೆನ್ನೆ;
ಹಸುನಗು ಅರಳಿ ಮುದವರಳಿ ನಾಡಿನ ತುಂಬ
ಬೆಳ್ಳನೆ ಉತ್ಸಾಹ ಉತ್ಕರ್ಷ ತುಂಬುತ್ತಿದೆ ಚೆನ್ನೆ.

ಗರತಿಯ ಹಣೆಯ ಉಂಗುರದ ಹಾಗಿನ ನಸುಗೆಂಪು
ಮೂಡಲಿನ ಮೆಟ್ಟಿಲನು ಮೆಟ್ಟಿ ಮೇಲೇರಿದ ಹಾಗೆ
ಅದೇನೋ ಲವಲವಿಕೆ ಚಟುವಟಿಕೆ ಸುತ್ತುಸುತ್ತಲೆಲ್ಲ;
ಕತ್ತಲಿಗೇ ಜೀವಬಂದಿದೆಯೋ, ಇದೇನು ಮೋಡಿ,
ಕತ್ತಲೆಯೆ ಕರಗಿ ಬೆಳಕು ನೀರಾಗಿ ಹರಿಯುತ್ತಿದೆ ಇಲ್ಲಿ.

ಹಕ್ಕಿಗಳ ಕಲಕಲರವ, ನವನವೀನತೆ ಉಲ್ಲಾಸ,
ಇದೆಲ್ಲದರ ಮಧ್ಯೆ ಅದೇನೋ ಪ್ರಶಾಂತ ಸಂಗೀತ;
ತಾಜಾತನ ತೇಜೋತನ ಪ್ರತಿ ಗಿಡಮರವನದಲ್ಲಿ,
ಹೊಸತನ ಹುರುಪು ಅಲೆಅಲೆಯಾಗಿ ಹರಿದು
ಅದೇನು ಅನುಭವ, ಚೆನ್ನೆ, ಸೂರ್ಯೋದಯದಲ್ಲಿ.

ಮೂಡಣ ಕಣ್ಣು ಮೇಲೇರಿ ಬೆಳಕು ಹಬ್ಬಿದಂತೆ,
ಹಿತ ಕೆಂಬಣ್ಣ ಮೆಲ್ಲ ಕಡುನೀಲವಾಗುತ್ತಿರುವಂತೆ,
ಮಿತ ತಂಗಾಳಿಯು ಬೆಚ್ಚನೆಯ ಹಬ್ಬುತ್ತಿದೆ, ನೋಡೆ;
ಮಲಗಿದ್ದ ಲೋಕವು ನಿದ್ರೆಯ ಮಬ್ಬನ್ನು ಕಳಚಿ
ಹೊಸಲೋಕದ ಹೊಸತನಕೆ ಕಾಲನ್ನಿಕ್ಕುತ್ತಿದೆ ಚೆನ್ನೆ.

ಕತ್ತಲೆಯೊಳಗಡರಿದ್ದ ಬೆದರಿದ್ದ ಆ ಹಳೆ ಗಾಳಿ
ಬಂಧನ ಕಿತ್ತೊಗೆದು ನವೋಲ್ಲಾಸದ ರೂಪಿನಲ್ಲಿ
ತಂಗಾಳಿಯಾಗಿ ಜನಮನ ಮುತ್ತಿಡುತ್ತಿದೆಯಲ್ಲ;
ಹಿತಮಿತ ಬೀಸಿ, ಅಪ್ಪಿ ಅದು ಮುದ ಕೊಡುವಾಗ
ಈ ಲೋಕವೆ ನಾಕ, ಸ್ವರ್ಗ ಮತ್ತೆ ಬೇರೆಲ್ಲೂ ಇಲ್ಲ.

ಗಿಡಮರಕೊಂಬೆಯ ನಡುವಲ್ಲಡಗಿದ್ದ ಹಕ್ಕಿ
ನೇಸರಿನ ಭರವಸೆ ಮೇಲೆ ಮತ್ತೆ ಪುಕ್ಕ ಬಿಚ್ಚಿ
ಬಾನಿನ ತುಂಬ ಕೇಕೇ ಹಾಕುವುದನು ನೋಡು,
ಕತ್ತಲಿನ ಭಯ ಮರೆತು ಬೆಳಕಿನ ಮರೆಯಲ್ಲಿ
ಹೊಸ ದಿನದ ಭರವಸೆ ಹಬ್ಬುವುದನು ನೋಡು.

ಕಗ್ಗತ್ತಲಿನ ಗರ್ಭದಲಿ ಬಾಡಿಬಗ್ಗಿದ ಗಿಡಬಳ್ಳಿ
ಬೆಳಕಿನ ಸ್ಫರ್ಶದಿ ವಿದ್ಯುತ್ತು ಸಂಚಾರವಾಗಿ
ಎಡೆಯೆತ್ತಿ ನಿಂತು ಝಗಝಗಿಸುವ ಪರಿ ನೋಡು;
ಕಂಪು ತುಂಬಿದ ಹೂವುಗಳು ಅರಳುತ್ತಿರುವಾಗ
ಹೊಸಹೊಸ ಚೈತನ್ಯ ತುಂಬುತ್ತಿದೆ ಸುತ್ತುಮುತ್ತು.

Praveen Kumar in Bhavana Comments

Praveen Kumar in Bhavana Popularity

Praveen Kumar in Bhavana Popularity

Close
Error Success