PRAVEEN KUMAR Kannada Poems Poems

Hit Title Date Added
1.
ಅರುಣೋದಯವಾಗಬೇಕು

ಕಣ್ಣುಕಟ್ಟಿರುವ, ಕತ್ತಲೆಯ ಮಬ್ಬನ್ನು ಹರಿದು,
ದೂರ ದಿಗಂತದ ಮರೆಯಿಂದ, ಬೆಳಕು ಹರಿದು,
ಹೊಸ ಚೇತನದ, ಹೊಸ ಆಕಾಂಕ್ಷೆಗಳ, ಅರುಣೋದಯವಾಗಬೇಕು;
ಶಿಥಿಲಗೊಂಡಿರುವ, ಧೈರ್ಯೋತ್ಸಾಹಗಳ ಪುನರುಜ್ಜೀವನಕ್ಕಾಗಿ,
...

2.
ನಾವು ನೀವಿರುವ ಲೋಕ

ಸಾಗರದ ನೀರನ್ನು ಎಳೆ ಬೊಗಸೆಗಳಿಂದ ಎತ್ತೆತ್ತಿ ಕುಡಿದು
ಸಾಗರದ ಮೂಲ ಕಂಡೆನೆನುವಷ್ಟೆ ನನ್ನ ಲೋಕದನುಭವದಾಳ,
ನಾನು ಮುಗಿಯದ ಲೋಕಜ್ಞಾನದ ಮಧ್ಯೆ ಹರಿದಾಡುವ ಕ್ಷುದ್ರ ಹುಳ,
ತಿಂದದಷ್ಟನ್ನೆ ಹೊರಹಾಕುವ ಎರೆಹುಳ, ಸೀಮಿತ ಪರಿಜ್ಞಾನವೆನ್ನದು.
...

3.
ಜೀವನ ಯಾನ

ದಿನದಿಂದಿನಕೆ ತೆರೆಯಿಂತೆರೆಗೆ
ಹಾರುತ ಸಾಗಿದೆ ಜೀವನ ನಾವೆ,
ಪಯಣದ ರಭಸಕೆ, ಗಾಳಿಯ ಒದೆತಕೆ
ದಿಕ್ಕನು ಮರೆತಿದೆ ನಾವೆಯ ಹಾಯಿ.
...

4.
ಸಮರಸತೆ

ಸಮರಸತೆಯೆ ಸಾಹಿತ್ಯ,
ಸಮರಸತಯೆ ಸಂಗೀತ,
ಸಮರಸತೆಯೆ ಭಾವ ಸಮ್ಮಿಳನದ ಸಾವಯವ ಸಂಬಂಧ,
ಸಮರಸತೆಯ ಜೀವವಿಕಸನದ ಓಂಕಾರನಾದ.
...

ಧರ್ಮದ ನಂದಾದೀಪ ನಂದುತ್ತಿದೆ ನೋಡಿ,
ಮತದ್ವೇಶದ ಕಾಡ್ಗಿಚ್ಚು ಹಬ್ಬುತ್ತಿದೆ ನೋಡಿ.

ಮಾನವ ಚೇತನದ ಪ್ರವಾದಿಗಳ ಅಂತರಾಳದನಾದ
...

6.
ಒಂಟಿ ಧ್ರುವತಾರೆ

ನನ್ನಾಶೆ ಆದರ್ಶಗಳ ಆಕಾಶದಲಿ
ಕಲೂಖಳರಿ ನಿಂತಿರುವ ಒಚಿಟಿ ಧ್ರುವತಾರೆ ನಾನು,
ಮೂಡಿ, ಕ್ಷಣಿಕ ಬೆಳಕನು ತೂರಿ, ಮುಳುಗುವ
ಸೂರ್ಯ, ಚಂದಿರ, ತಾರೆಗಳು ಹಲವು;
...

7.
ಸೂರ್ಯ

ದಿನರಾತ್ರಿ ಎನ್ನದೆ ಭೂಮಿ ಸುತ್ತುವ ಓ ತಪಸಿಯೆ,
ಬಳಲಿಕೆ, ಬಾಯಾರಿಕೆ ನಿನಗೊಂದೂ ಇಲ್ಲವೆ?
ಇಹಪರವನೆನ್ನದೆ ಜೀವತುಂಬುವ ತೇಜ ಪುಂಜವೆ,
ಕಾಲ ಮಿತಿ, ಕತ್ತಲು ನಿನಗೆಂದೂ ಬಾರದೆ?
...

8.
ಕ್ಲಿಷ್ಠ ಸಂಬಂಧ

ನಾವೆಲ್ಲರೂ ವಿಶಿಷ್ಠ ಪ್ರಜ್ಞವಂತರೆ ಹೌದು,
ನಮನಮಗೆ ನಾವು ಪ್ರಜ್ಞವಂತರು ಹೌದು;
ಬೇರೊಬ್ಬರೊಪ್ಪುವ ಬಿಡುವ ಪರಿವೆ ನಮಗಿಲ್ಲ,
ನಮ್ಮ ನಳೆಯುವ ಶಕ್ತಿ ಬೇರೊಬ್ಬರಿಗಿಲ್ಲ.
...

9.
ಮೃತ್ಯು

ಓಮೃತ್ಯು, ನಿನ್ನಾಳ ವೈಶಾಲ್ಯ ಅರಿತವರಿಲ್ಲ,
ಎಲ್ಲಿಂದ ಬರುವೆ, ಎಲ್ಲಿ ಸೇರುವೆ ತಿಳಿದವರಿಲ್ಲ;
ಕಾಲಬಾಹುವೆ, ನಿನ್ನ ಕಾರ್ಗತ್ತಲಿನ ಸ್ಪರ್ಷದಲಿ,
ನಿಂತಿದ್ದ ನೆಲ ಕರಗಿ, ಕಣ್ಣೀರು ಕವಲೊಡೆಯುವುದು,
...

10.
ಬಯಲು

ಬನ್ನಿರೈ, ಬನ್ನಿರೈ ಬಾಯಗಲಿ ನಿಂತ ಬಯಲಿಗೆ,
ಬನ್ನಿರೈ, ಬನ್ನಿರೈ ಕೈಯೆತ್ತಿ ಕರೆವ ಕಡಲಿಗೆ,
ದೂರದಿಂದ ನನ್ನ ನಿಮ್ಮ ಬನ್ನಿರೆಂದು ಕರೆಯುತ್ತಿದೆ,
ನನ್ನದೆಲ್ಲ ನಿವ್ಮ್ಮದೆಂದು ಒಡಲು ಬಿಚ್ಚಿ ನುಡಿಯುತ್ತಿದೆ;
...

Close
Error Success