ಹೃದಯ ಹಂದರದಲ್ಲಿ ಹುದುಗಿ ಹರಿಯುವ ಗಂಗೆ
ಮರೆತೂ ದಡವನು ಮೀರಿ ಹರವದಿರಲಿ.
ನಿಶ್ಯಕ್ತ ನಿಮಿಷಗಳು ನಿರ್ಮಲ ಗುಪ್ತಗಾಮಿನಿ ಗಂಗೆ
ಕೆಸರು ಕಲ್ಮಶ ಕೂಪ ಕಾರಣವಾಗದಿರಲಿ,
ಮೌನ ಘನತೆಯ ಭಾರ, ಸಹನೆ ಹಬ್ಬುವ ಹಾರ
ಮರೆತೂ ನಿಜವನು ದಾಟಿ ಮರೆಯಾಗದಿರಲಿ,
ನಿರ್ಧಾರದ ನಡತೆಯಲಿ, ನಿರ್ಧಾಕ್ಷಿಣ್ಯದಿ ನಡೆದು
ಆಕಾಶದೆತ್ತರಕೆ ಧ್ಠೃಷ್ಠಿ ಹಬ್ಬುತ್ತಿರಲಿ.
This poem has not been translated into any other language yet.
I would like to translate this poem