ಕಾಮನ ಬಿಲ್ಲಿನ ತೊಟ್ಟಿಲಿನಲ್ಲಿ,
ತಂಬೆಲರಿನ ಹಿತಕರ ಸ್ಪರ್ಶದಲ್ಲಿ,
ತಣ್ಗದಿರಿನ ಮುಸುಕಿನ ಅಮೂರ್ತತೆ ಹೊದಿದು,
ಮಲಗಿದ ಸುಂದರಿ, ಕವಿಗಳ ರಾಣಿ.
ಬಯಕೆಯ ಸುಂದರ ವರ್ಣಶ್ವದ ಮೇಲೆ,
ರಾಜಕುಮಾರ ದೌಡುಸಿ ಬಂದ;
ಮಲಗಿದ ರಾಣಿಯ ಪಲ್ಲಂಗಕ್ಕೆ,
ಉತ್ಸಾಹದ ಬಲದಿ, ಹಾಕಿದ ಲಗ್ಗೆ.
ಎಚ್ಚರಗೊಂಡು, ಮೈಮುರಿದಳು ಚೆಲುವೆ,
ಕಣ್ಣನ್ನುಜ್ಜುತ, ಆಕಳಿಸಿ, ನಿಂದಳು;
ಕುಪ್ಪಸ, ಸೆರಗನು, ಸರಿ ಮಾಡುತ ಚೆಲುವೆ,
ಬಯಕೆಯ ಕಣ್ಣಿಗೆ ಮೈಯೊಡ್ಡಿದಳು.
ಕೊಬ್ಬಿದ ಗೂಳಿ, ರಾಜಕುಮಾರ,
ರಾಣಿಯ ಮೈಮೇಲೆ ಏರಿಯೆ ಬಿಟ್ಟ;
ಮೈಚಳಿಬಿಟ್ಟ, ಕವಿಗಳ ರಾಣಿ,
ತನ್ನನ್ನವನಿಗೆ ಬಿಟ್ಟುಕೊಟ್ಟಳು.
ಮೈ ಮೈ ಸುತ್ತಿ, ಬಯಕೆಯು ಹುರಿಗೊಂಡಿತು.
ಮೈ ಕೈ ಬಳಸಿ ಎರಡೊಂದಾುತು;
ಏರಿಳಿತದಬ್ಬರಕೆ ಹೌಹಾರಿತು ಜೀವ,
ಹೊಸಹೊಸತನ, ಹೊರ ಹರಿುತು ಹಬ್ಬಿ.
ಚಂದಿರನಿಂದ, ಸೂರ್ಯನ ವರೆಗೆ,
ನಕ್ಷತ್ರದ ಬೆಳಕಿನ ಚಪ್ಪರದಡಿಯಲ್ಲಿ,
ಬಣ್ಣದ ಕಿರಣದ, ನೂಲೇಣಿಯ ಕಟ್ಟಿ,
ಪ್ರಣುಗಳದರಲಿ ಆಡಿದರಾಟ.
ಕಲ್ಪನೆಯರಮನೆ, ಆಕಾಶಕ್ಕೇರಿತು,
ಮೂರ್ತಮೂರ್ತದ ವ್ಯತ್ಯಾಸವು ಕರಗಿತು;
ಅಣುಕಣದಲ್ಲೂ, ಬ್ರಹ್ಮಾಂಡವು ಮೆರೆುತು,
ಈ ಲೋಕವು ಸುಖದ ಸುಪ್ಪತ್ತಿಗೆಯಾುತು.
ಬಯಕೆಯ ಬಾಹು ಬಂಧನದಲ್ಲಿ,
ಭದ್ರತೆ ತೃಪ್ತಿಯ ಸುಖಸೆರೆಯಲ್ಲಿ,
ಮುಕ್ತ ಪ್ರಪಂಚದ ರುಚಿಯನ್ನುಂಡು,
ಕವಿಗಳ ರಾಣಿ, ತೃಪ್ತಿಯನ್ನುಂಡಳು.
ಪ್ರಣಯದ ಕಾವು, ಹೃಸ್ವಿಸಿ ಬರಲು,
ಬಯಕೆಯ ಬಿಗಿತವು ಸಡಿಲಿಸಿ ಬಂತು;
ಮೈಯ ಕೊಡವಿ, ಹೊರ ಬಂದಳು ರಾಣಿ;
ರಾಜಕುಮಾರನೆಲ್ಲೋ ಮರೆಯಾಗಿದ್ದ.
ಬಂಧನವಿಲ್ಲ, ಬಿಗಿತವೂ ಇಲ್ಲ,
ಕಲ್ಪನೆಗಲ್ಲಿ ಸುಖಕಾಣಿಸಲ್ಲಲ್ಲ;
ಕುಪ್ಪಸ, ಕೂದಲ, ಬಿಗಿ ಕಟ್ಟಿದ ರಾಣಿ,
ಲೋಕದ ಥಂಡಿಗೆ, ಪುನ: ಮೈಯೊಡ್ಡಿದಳು.
This poem has not been translated into any other language yet.
I would like to translate this poem