ಕಡಲು ಕಡೆದಾಗ ವಿಷಾಮೃತ ಮೂಡಿತ್ತು,
ಕಡಲು ದುಡಿದಾಗ ಧನರಾಶಿ ಕೊಟ್ಟಿತ್ತು,
ಅಬ್ಬರ-ಉಬ್ಬರ ಮಧ್ಯದೀ ತಪಮಗ್ನಯೋಗಋ
ತಳಕಾಣದ ಜಲರಾಶಿ, ಜೀವಭವ ಸಂಚಯನ.
ರಾಗಾವೇಗ, ಭಾವಜೀವ ಪ್ರಪಾತದ ರಾಶಿ
ಕಡಲ ದಟ್ಟನೀಲಜಾಲದಾಳದಲ್ಲಡಗಿದೆ,
ಕಾಲಾದ್ಯಂತ ಮಧ್ಯದೀ ಸ್ಥಿರಸ್ತಬ್ಧ ಕಡಲು
ಸ್ಥಿರಪ್ರಜ್ಞಗುರು, ಜ್ಞಾನಖನಿ, ತ್ರಿಕಾಲ ಸಾಕ್ಷ್ಯಿ.
This poem has not been translated into any other language yet.
I would like to translate this poem