ಕಾವ್ಯ ಶ್ರೀ Poem by PRAVEEN KUMAR Kannada Poems

ಕಾವ್ಯ ಶ್ರೀ

ಕರೆದಾಗ ಬರುವವಳಲ್ಲ,
ಮೈಮರೆತಾಗ ಮನಮಂಡಲದಲ್ಲಿ
ಬಳಕು ಸೆರಗನು ಚೆಲ್ಲಿ, ಬೆಳ್ಳಿ
ಬೆಳಕಲಿ ತೇಲಿ, ಜಾರಿ, ಮೇಲೇರಿ,
ಚುಂಬಕ ಚುಂಬನವಿಟ್ಟು ಹಾರುವ
ರಸನಷೆ, ಬೆಡಗಿನ ಬಳ್ಳಿ ಉಷೆ.

ರಾಶಿಹಣದಲ್ಲಿ ಮೈಮಾರಿ ನೆರೆವ
ಕಾಮುಕ ವ್ಯಾಪಾರ ಸೊತ್ತು ಅವಳಲ್ಲ,
ಬಾಚಿ ಜನರನ್ನು ಮೈಮಾರಿ ಕರೆವ
ಯೌವನದ ನಶ್ವರ ವಾಂಛಲ್ಯವಲ್ಲ.

Saturday, April 30, 2016
Topic(s) of this poem: poems
COMMENTS OF THE POEM
READ THIS POEM IN OTHER LANGUAGES
Close
Error Success