Praveen Kumar in Bhavana Poems

Hit Title Date Added
1.
ಕವನ ಹೇಗಿರಬೇಕು?

ಕವನ ಹೇಗಿರಬೇಕು?
ಕವನ ಹವನ ಮಾಡಿದಂತಿರಬೇಕು,
ಹವಿಸ್ಸುಗಳು ಹೋಮಕುಂಡಕ್ಕೆ ಬಿದ್ದು,
ಅಮೂರ್ತಧೂಮವಾಗಿ ಆಕಾಶಕ್ಕೇರಬೇಕು,
...

2.
ನಿನ್ನ ಕುಸುರಿನ ಕೆಲಸ

ಈ ಮನೋಹರ ಲೋಕವು, ನಿನ್ನ ಕುಸುರಿನ ಕುಶಲ ಕೆಲಸ,
ನಿನ್ನ ಸಿದ್ಧಿ, ಶಕ್ತಿಗಳತ್ಯುನ್ನತ ಪರಿಪೂರ್ಣ ಪರಿಪಾಕ;
ನಿನ್ನನ್ನೆ ತುಂಬಿ, ನೀ ಸಿದ್ಧಗೊಳಿಸಿದ, ನಿನ್ನ ಪ್ರತಿಬಿಂಬ;
ನೀನೋ ಅಚ್ಯುತ, ಅಸ್ಖ್ನಲಿತ, ದೋಷರಹಿತ, ಪರಿಪೂರ್ಣ,
...

3.
ಮಹಾ ಸಿದ್ಧ

ಬುದ್ಧ, ಮಹಾಸಿದ್ಧ,
ಹೀಗೋ ಸಂಸಾರ ಕೂಪಕ್ಕೆ ಬಿದ್ದಿದ್ದ;
ಬಿದ್ದಲ್ಲಿಂದ ಮೇಲೆದ್ದ,
ವಾಸನೆಗಳ ಗೆದ್ದ,
...

4.
ಜೀವನದ ಬೆಳಕು

ಅವಳು ಬಂದು ನನ್ನನೆಚ್ಚರಿಸಿದಾಗಲೆ, ನನಗೆ ಗೊತ್ತು,
ನಾನಿಲ್ಲಿದ್ದೇನೆ, ಹೀಗಿದ್ದೇನೆ ಎಂದು;
ಅವಳು ಬಂದು, ಕಿವಿಯಲ್ಲಿ ಪಿಸುಗುಟ್ಟಿದಾಗಲೆ ಗೊತ್ತು,
ಹೊತ್ತು ಕಳೆದು, ಬೆಳಕು ಮೇಲೇರಿದೆ ಎಂದು.
...

5.
ಗಾಂಧಿ

ಗಾಂಧಿ,
ನೀನಿಂದು, ಹೃಸ್ವ ದೃಷ್ಠಿಗಳ ಬಂಧಿ;
ಬರ್ನಾರ್ಡ್ ಶಾ ರಿಂದ,
ಟಾಗೋರ್ ನೆಹರೂವರೆಗೆ,
...

6.
ನಾವು ನೀವಿರುವ ಲೋಕ

ಸಾಗರದ ನೀರನ್ನು ಎಳೆ ಬೊಗಸೆಗಳಿಂದ ಎತ್ತೆತ್ತಿ ಕುಡಿದು
ಸಾಗರದ ಮೂಲ ಕಂಡೆನೆನುವಷ್ಟೆ ನನ್ನ ಲೋಕದನುಭವದಾಳ,
ನಾನು ಮುಗಿಯದ ಲೋಕಜ್ಞಾನದ ಮಧ್ಯೆ ಹರಿದಾಡುವ ಕ್ಷುದ್ರ ಹುಳ,
ತಿಂದದಷ್ಟನ್ನೆ ಹೊರಹಾಕುವ ಎರೆಹುಳ, ಸೀಮಿತ ಪರಿಜ್ಞಾನವೆನ್ನದು.
...

7.
ನಡೆಸು ನಮ್ಮ ಬಾಳರಥವನ್ನ

ಹೇಳದೆಯೆ, ಕೇಳದೆಯೆ, ಬರುವವಳು ನೀನು,
ಮಲಗಿದ್ದ ನಮ್ಮನ್ನು, ಎಚ್ಚರಿಸಿದವಳು;
ಮಾಗಿಯ ಚಳಿಯೆಂದು, ಒಳಗೊಳಗಡಗಿದ್ದ ನಮ್ಮ,
ವಸಂತ ಇದುಯೆಂದು, ವಾಸ್ತವಿಕಕೆ ತಂದು,
...

ನೀನು ಕರೆದರೆ, ಬರುವವರು,
ನೀ ನೂಕಿದರೆ, ಕುಣಿದೋಡುವವರು,
ನೀನಾಡಿಸಿದಂತೆ, ಕ್ಷಣ ಕ್ಷಣ ಆಡುವವರು ನಾವು.
ಕಾಲಾಯ ತಸ್ಮೈ ನಮ:
...

9.
ಅರುಣೋದಯವಾಗಬೇಕು

ಕಣ್ಣುಕಟ್ಟಿರುವ, ಕತ್ತಲೆಯ ಮಬ್ಬನ್ನು ಹರಿದು,
ದೂರ ದಿಗಂತದ ಮರೆಯಿಂದ, ಬೆಳಕು ಹರಿದು,
ಹೊಸ ಚೇತನದ, ಹೊಸ ಆಕಾಂಕ್ಷೆಗಳ, ಅರುಣೋದಯವಾಗಬೇಕು;
ಶಿಥಿಲಗೊಂಡಿರುವ, ಧೈರ್ಯೋತ್ಸಾಹಗಳ ಪುನರುಜ್ಜೀವನಕ್ಕಾಗಿ,
...

ಕಾಮನ ಬಿಲ್ಲಿನ ತೊಟ್ಟಿಲಿನಲ್ಲಿ,
ತಂಬೆಲರಿನ ಹಿತಕರ ಸ್ಪರ್ಶದಲ್ಲಿ,
ತಣ್ಗದಿರಿನ ಮುಸುಕಿನ ಅಮೂರ್ತತೆ ಹೊದಿದು,
ಮಲಗಿದ ಸುಂದರಿ, ಕವಿಗಳ ರಾಣಿ.
...

Close
Error Success