Praveen Kumar in Divya Belaku

Praveen Kumar in Divya Belaku Poems

ನನ್ನ ಪ್ರಿಯ ನೆನಪು ನೀನು, ಎಷ್ಟು ದೂರವಿದ್ದರೇನು,
ನೀತಿ ನಡತೆ ಭೀತಿಯಿಂದ ದೂರ ದೂರ ಸರಿದರೇನು,
ದೀಪ-ಬೆಳಕು, ಹೂವು-ಗಂಧ, ಚಿನ್ನ-ಹೊಳಪು, ಭೂಮಿ-ಸೆಳೆತ
ಎಷ್ಟು ಕಾಲ ದೂರ ದೂರ ಹೀಗೆ ಬಿಟ್ಟು ಇರಲು ಸಾಧ್ಯ?
...

ನನ್ನ ಮನಸಿನಾಶೆಯಾಗಿ ಅವಳು ಬಂದು ನನ್ನ ಹಿಡಿದು
ನಲ್ಲನೆಂದು ಗಲ್ಲಹಿಡಿದು ಮೆಲ್ಲ ಮುತ್ತು ಬೆಲ್ಲ ಕೊಟ್ಟು
ಮುಖಕೆ ಮುಖವನಿಟ್ಟು ನಕ್ಕು ಉಸಿರುಗುಸಿರು ಬಿಸಿಯ ಬೆರೆಸಿ
ಎದೆಯ ಮೇಲೆ ಎದೆಯನಿಟ್ಟು ಪ್ರೇಮ ತಿದಿಯನೊತ್ತಿದಾಗ
...

ಅವಳೆದೆಯ ತೆರೆದು ಕೈತುಂಬ ಹಿಡಿದೆ,
ಹೊರ ಸುರಿದ ಭಾವುಕ ಸಿಹಿ ಜೇನು
ಮೈಕೈ ತುಂಬಿ, ಹರಿದು ಹರಿದು ತಂದಿತು ಮತ್ತು;
ಮಲ್ಲಿಗೆಯ ದೇಹ ಮತ್ತಷ್ಟು ಬೀಗಿ ಕೊಟ್ಟು
...

ಯಾಕೆ ನಿನ್ನ ಕಣ್ಣಿನಲ್ಲಿ ನನ್ನ ಕಂಡು ಇಷ್ಟು ಹೊಳಪು,
ಹಿಂದೆ ಎಂದು ಕಾಣದಂತ ಬಣ್ಣ, ಆಶೆ, ಕನಸು, ಹುರುಪು,
ಹೃದಯ ತುಂಬಿ ಉಕ್ಕಿ ಬಂದ ನಗುವು ನಿನ್ನ ಮುಖದ ಮೇಲೆ,
ದೇವರನ್ನೆ ಕಂಡ ತೃಪ್ತಿ ಶಾಂತಿ ನನ್ನ ಕಂಡ ಮೇಲೆ.
...

ನೀನೆಲ್ಲಾದರೂ ಇದ್ದಿದ್ದರೆ ಇಲ್ಲಿ ಬರಬೇಕಿತ್ತು,
ಓಡೋಡಿ ಬಂದು, ನೋವು ನಲಿವು ಹಂಚಬೇಕಿತ್ತು;
ನನ್ನನ್ನು ಕಂಡು, ಕಣ್ಣಿನಾರತಿ ಬೆಳಗಿ
ನಿನ್ನಾತ್ಮ ಬೆಳಕನ್ನು ಸುತ್ತ ಚೆಲ್ಲಬೇಕಿತ್ತು;
...

ದಶಕ ದಶಕಗಳ ಗುಂಟ ಕಾಲ ಸೇತುವೆ ಕಟ್ಟಿ,
ಅಳಿದುಳಿದು, ಬಿದ್ದೆದ್ದು, ನೀ ಮುಂದೆ ಮುಂದೆ ಬಂದೆ;
ಗುರಿಯು ತಲಪುವ ತವಕ, ನನ್ನ ಕಾಣುವ ತನಕ
ಭೂಮ್ಯಾಕಾಶಗಳ ಸೀಳಿ, ನಿಹಾರಿಕೆಗಳ ಮೀರಿ,
...

ದಂತದಿಂದ ಕಡೆದ ನಾಜೂಕಿನ ಮೈಸಿರಿಯವಳೆ,
ಚಂದನದ ಸವಿಸ್ವಾದ ಕಣಕಣದಿಂದ ಹೊರಸೂಸುವವಳೆ,
ನೀನು ಬರೆ ರಂಭೆ ಊರ್ವಶಿ ಮೆನಕೆ ಮಾತ್ರವಲ್ಲ,
ಹುಣ್ಣಿಮೆಯ ಬೆಳದಿಂಗಳಲಿ ಮಿಂದು ನಿಂತ ಶಾರದೆಯೆ.
...

ಅವಳು ಬಂದು ನನ್ನನೆಚ್ಚರಿಸಿದಾಗಲೆ, ನನಗೆ ಗೊತ್ತು,
ನಾನಿಲ್ಲಿದ್ದೇನೆ, ಹೀಗಿದ್ದೇನೆ ಎಂದು;
ಅವಳು ಬಂದು, ಕಿವಿಯಲ್ಲಿ ಪಿಸುಗುಟ್ಟಿದಾಗಲೆ ಗೊತ್ತು,
ಹೊತ್ತು ಕಳೆದು, ಬೆಳಕು ಮೇಲೇರಿದೆ ಎಂದು.
...

ನಿನ್ನೆನ್ಪು ನನ್ನ್ಯೇದೆ ಬಿರಿದ್ಯಾಂಗ,
ಕಣ್ಣೀರು ಮಳೆಯಂಗೆ ಸುರಿದ್ಯಾಂಗ,
ಕಾಲಾನ, ಲೋಕಾನ ಮರೆವಾಂಗ;
ನೆನ್ಪಿನ ಉರಿಯಾಗೆ ನನ್ನನ್ನು ಬಿಟ್ಟು
...

ಮಾಘ ಮಾಸ ಬಿಸಿಲಿನಂತೆ
ಮಿಂಚಿ ಮನಕೆ ಬೆಳಕು ತಂದೆ,
ಶಿಶಿರ ಶಾಖ ಬೆಸೆವ ಮೊದಲೆ
ಹಾರಿ ಯಾಕೆ ದೂರ ಹೋದೆ?
...

ನೀನೆಲ್ಲಿರಲಿ, ನಿನ್ನ ನೆನೆದಾಕ್ಷಣ ನನ್ನ
ಮನದಲ್ಲೇನೋ ವಿಲಕ್ಷಣ ನೋವು, ತವಕ,
ಏನೋ ಕಳೆದ ಬರಿದು ಅನುಭವ, ಚಿನ್ನ,
ಏನೋ ನನ್ನದು ನನ್ನಿಂದ ಕಳಚಿದ ಮರುಕ.
...

ನನಗೆ ನೀನು ಬೇಕೇ ಬೇಕು,
ನನ್ನೊಡನೆ ಬೆರೆಯಬೇಕು,
ನಿನ್ನ ನನ್ನ ಸಾಮರಸ್ಯ
ಪೂಜೆಗೆಂದು ದೇವಿಗಿಟ್ಟ
...

ನಿನ್ನ ನೋಡಬೇಕೆನುವಾಸೆ ಮೈಮನ ತುಂಬಿನಿಂತಿದೆ ನೋಡು,
ನಿನ್ನಾಸೆ ಭಾವರೋಧನವಾಗಿ ಉಕ್ಕೇರಿ ಚಿಮ್ಮುತ್ತಿದೆ ಹಾಡು;
ಎಲ್ಲಿ ನೋಡಿದರಲ್ಲಿ, ಕಲ್ಲುಮುಳ್ಳು ಕಳ್ಳಿಗಂಟಿಗಳಿರುವಲ್ಲಿ,
ನೀನಾವ ಮರೆಯಲ್ಲಿ ನನಗಾಗಿ ತಡಪಡಿಸುವೆಯೋ ಏನೋ;
...

ನಾನೆಷ್ಟು ಕಾದುಕುಳಿತೆ ನೀನು ಬರುವೆಯೆಂದು,
ನೀನು ಬರಲಿಲ್ಲ, ನನ್ನಾಶೆಯನು ತರಲಿಲ್ಲ;
ಕಾದು ಕಾದು ಕೋಣೆಯ ಗೋಡೆ ಬಿರುಕು ಬಿಟ್ಟುವು,
ಕವಿದ ಕತ್ತಲ ಸಾಂದ್ರಗೂಡು ಹಲವು ವರುಷ ಕಂಡವು,
...

ದೂರ ದೂರ ದಿಗಂತದಾಚೆ,
ದೂರದ ಮೂಡಣ ಮೋಡಗಳಾಚೆ
ಬಣ್ಣಬಣ್ಣದ ಕುದುರಯನೇರಿ,
ಕಲ್ಪನೆ ಕನಸಿನ ಏಣಿಯನೇರಿ,
...

ನೀನು ಆವಿ ಮೋಡವಾಗಿ ದೂರ ಗಗನವೇರುತಿರಲು
ಯಾರಿಗಾಗಿ ಬರೆದು ನಾನು ಹಾಡಬೇಕು ಹೇಳು ನೀನು,
ಕಾಲ ಕುದುರೆಯೇರಿ ನೀನು ದೂರ ದೂರ ಓಡುತಿರಲು
ಹೇಗೆ ನಿನ್ನ ಬೆನ್ನು ಹಿಡಿದು ಹೆಜ್ಜೆ ಮುಂದೆ ಇಡಲಿ ನಾನು?
...

ನೀನು ಬರುವಿಯೆಂದು ನಾನು
ಊಟ ನಿದ್ರೆ ಸ್ನಾನ ಮರೆತು,
ಹಗಲು ರಾತ್ರಿ ಬೇಧ ಮರೆತು
ಒಳಗೆ ಹೊರಗೆ ತಿಕ್ಕಿತೊಳೆದು,
...

ದೂರ ನೀನಿರುವಾಗ, ಹಾರಿ, ನಿನ್ನ ಸೇರಬೇಕೆನ್ನವಾಸೆ,
ಹಾರಿ, ಹಾರಿ, ಬಂದು, ಹಿಡಿದು, ನಿನ್ನ ಬಿಗಿದಪ್ಪುವಾಸೆ;
ಬಾುತುಂಬ ನುಡಿದು, ಹೃದಯದಾಸೆ ಹೊರ ಹರಿಸುವಾಸೆ;
ನೀ ಬಂದಾಗ ಬಳಿಗೆ, ತಿಳಿಯದಾತುರ, ಮುಜುಗರ, ಮಹಾಪೂರ ಒಳಗೆ,
...

ಇದ್ದಾಗ ಕೊಡಬೇಕೆಂದಾಗ
ಬರಲಿಲ್ಲ ನೀನು,
ಬಂದು ನೀನು ಕಾದುನಿಂತಾಗ
ಉಳಿದಿಲ್ಲ ನನ್ನಲ್ಲೇನೂ.
...

ಇದು ಸೋಲುಗೆಲುವಿನ ಕತೆಯಲ್ಲ,
ಆತ್ಮದಾಳದ ಕಾಲಾತೀತ ವ್ಯಥೆ;
ಇದು ಏಳುಬೀಳಿನ ಆಘಾತವಲ್ಲ,
ಜನ್ಮಜನ್ಮದನುಷಂಗ ಪ್ರಘಾತ.
...

Praveen Kumar in Divya Belaku Biography

Praveen Kumar with his more than three decades of government service at senior levels and as a poet of seventeen published collections and as an author of six volumes on matters of governance and administration is a familiar face in Indian intellectual circuits. His more than 30 contributions on governance and administration to prominent national dailies like The Hindu, Indian Express, Deccan Herald and Times of India and other periodicals and journals were extremely popular and often sensational by their innovative unorthodox thoughts. He retired from Government Service as a Senior Police Officer after 31 years of service that covered assignments as Director of Food and Civil Supplies Enforcement, Deputy Commissioner of Bangalore City, State Intelligence in charge of Foreigners, Coastal Security Police and various assignments in CID inter alia. Born in Mangalore as the eldest son of Shree R.D.Suvarna and Smt. B.Sarojini, Praveen Kumar graduated in Science from St. Aloysius College, Mangalore, going on to obtain post-graduate degree in Literature from Mysore University. He also holds post-graduate diploma in Business Management as well as Higher Diploma in Cooperative Management. He also attended six advanced courses at the National Police Academy, Hyderabad. His Poem, 'Justice' figures in Karnataka IX Standard Second Language English Text Book from the 2013-14 Academic Year.)

The Best Poem Of Praveen Kumar in Divya Belaku

ಪ್ರಿಯ ಗೀತೆ

ನನ್ನ ಪ್ರಿಯ ನೆನಪು ನೀನು, ಎಷ್ಟು ದೂರವಿದ್ದರೇನು,
ನೀತಿ ನಡತೆ ಭೀತಿಯಿಂದ ದೂರ ದೂರ ಸರಿದರೇನು,
ದೀಪ-ಬೆಳಕು, ಹೂವು-ಗಂಧ, ಚಿನ್ನ-ಹೊಳಪು, ಭೂಮಿ-ಸೆಳೆತ
ಎಷ್ಟು ಕಾಲ ದೂರ ದೂರ ಹೀಗೆ ಬಿಟ್ಟು ಇರಲು ಸಾಧ್ಯ?
ಎಷ್ಟು ದೂರ ದೂರ ನನ್ನ ನೀನು ಹೀಗೆ ಇಡಲು ಸಾಧ್ಯ?
ಎಷ್ಟು ಕಾಲ ಸೂರ್ಯ ತನ್ನ ಬೆಳಕು ಹಗಲು ಅಡಗಿಸಿಟ್ಟು,
ಎಷ್ಟು ದೂರ ಬೆಳಕು ತನ್ನ ವೇಗ ಪಥವ ಮುಚ್ಚಿಟ್ಟು,
ವಿಶ್ವಧರ್ಮ ಮೀರಿ ನಿಂತು ತಾನು ತಾನೆ ನಿಲ್ಲಬಹುದು?
ಇಷ್ಟು ಕಾಲ ಆದ ಮೇಲೆ, ಇಷ್ಟು ದೂರ ನಡೆದ ಮೇಲೆ,
ಅದೆಷ್ಟು ಕಷ್ಟ ಆದರೇನು, ಸೋಲು ನಷ್ಟ ಬಂದರೇನು,
ಇಂದಲ್ಲ ನಾಳೆ ನೀನು ನನ್ನ ಹುಡುಕಿ ಬಳಿಗೆ ಬರಲೆ ಬೇಕು,
ಬಂದು ನನ್ನ ಸೇರಿ ಬಿಟ್ಟು, ಜೀವ ಜೀವ ಬೆರೆಯಬೇಕು;
ದೇಹ ದೇಹ ಬೆಸೆದುಕೊಂಡು, ನಾನು ನೀನು ಐಕ್ಯಗೊಂಡು
ನನ್ನ ನಿನಗೆ, ನಿನ್ನ ನನಗೆ ಕೊಟ್ಟು ಕೊಟ್ಟು ಪಡೆದು ಪಡೆದು
ದಿವ್ಯ ಸುಖದ ನೆರಳಿನಲ್ಲಿ ಅಗೆದು ಬಗೆದು ಬೆರೆತುಕೊಂಡು
ಉರುಳಿ ತೆವಳಿ, ತೆವಳಿ ಉರುಳಿ, ಅಪ್ಪಿ ಹಿಡಿದು, ಹೀರಿ ಹೀರಿ,
ನೀನು ನಾನು, ನಾನು ನೀನು ಆಗಿ ಎಲ್ಲ ಮರೆಯಬೇಕು;
ಆಳ ಆಳ ಇಳಿದು ನಾವು, ನಿನ್ನ ನನ್ನ ತಿರುಳು ತಲಪಿ
ದಿವ್ಯ ಬೆಳಕು ಸಾಕ್ಷ್ಯಿಯಲ್ಲಿ ಭವ್ಯವಾಗಿ ಬೆಸೆಯಬೇಕು.

ನೀನು ಅಲ್ಲಿ, ನಾನು ಇಲ್ಲಿ, ಯಾವ ಸೀಮೆ ತಿರುವು ನ್ಯಾಯ?
ಅಲ್ಲಿ ನೀನು ನೋವಿನಲ್ಲಿ ಹಗಲು ರಾತ್ರಿ ಮರುಗುವಾಗ,
ಇದ್ದುದನ್ನು ಬಿಟ್ಟುಕೊಟ್ಟು, ನನ್ನ ಧ್ಯಾನದಲ್ಲಿ ನಿಂತು,
ಬಂಧು ಲಗ್ನ ಬಂಧ ಬೇಡ, ವೃದ್ಧಿ ಖ್ಯಾತಿ ಸುಖವು ಬೇಡ,
ತಲಪದಂತ ಗುರಿಯೆ ತನ್ನ ಬದುಕು ತಪಸು ಎಂದು ಬಗೆದು
ಯಾಕೆ ನನ್ನ ಪ್ರಿಯ ಜೀವ ಹೀಗೆ ನೀನು ಚಿವುಟುವೆ?
ಯಾಕೆ ನನ್ನ ಆತ್ಮವನ್ನು ನೋವಿನಿಂದ ಕಿವುಚುವೆ?
ಇತ್ತ ನೋಡು, ನಾನು ಇಲ್ಲಿ ನಿನ್ನ ನೆನಪಿನಾಳದಲ್ಲಿ,
ಎಲ್ಲ ಮರೆತು, ನಿನ್ನ ದಾರಿ ಹಗಲು ರಾತ್ರಿ ಕಾದುಕೊಂಡು
ಜೀವನ್ಮ್ರತ ಜೀವಿಯಾಗಿ ಹಗಲು ರಾತ್ರಿ ಗುಣಿಸುವೆ;
ಬಂಧು ಬೇಡ, ಬಳಗ ಬೇಡ, ನಿನ್ನ ಹೊರತು ಬದುಕು ಬೇಡ,
ನೀನು ನನ್ನ ಧ್ಯೇಯವೆಂದು, ಒಂದೆ ಧ್ಯಾನದಿಂದ ನಿನ್ನ
ನನ್ನ ತುಂಬ ತುಂಬಿಕೊಂಡು, ದೂರದಾಶೆಯಿಟ್ಟುಕೊಂಡು,
ಮಸಣಭೂಮಿಯಲ್ಲಿ ನಾನು ಮುಂದೆ ಮುಂದೆ ನಡೆಯುವೆ;
ಎಷ್ಟು ವರ್ಷ ಹೀಗೆ ನಾವು ನೋವು ಶಿಕ್ಷೆಯಲ್ಲಿ ಬೆಂದು,
ಎಷ್ಟು ದೂರ ಕ್ರಮಿಸಬೇಕು, ವಿರಹ ಬೇಗೆ ಸಹಿಸಬೇಕು?
ಸಾಕು ಇಷ್ಟು ಪಟ್ಟ ಪಾಡು, ಬೇಗ ಬಂದು ಮುಂದೆ ನಿಲ್ಲು,
ದಾಹ ಭರಿತ ನಾನು ನಿನ್ನ ಸುಡುವ ಸಹರ ಭೂಮಿಯಂತೆ
ಮೈಯನೆಲ್ಲ ತಡವಿ ಹಿಡಿದು, ಹೀರಿ ಹಿಂಗುವುದನು ನೋಡು.

ನನಗೆ ನೀನು ಬೇಕೆ ಬೇಕು, ನಿನಗೆ ನಾನು ಬೇಕೆ ಬೇಕು,
ನಿನ್ನ ಬಿಟ್ಟು ನಾನು ಇಲ್ಲ, ನನ್ನ ಬಿಟ್ಟು ನೀನು ಇಲ್ಲ;
ಈ ವಿಶ್ವ ನಿಯಮ ಮರೆತು ಹೇಗೆ ವಿಶ್ವಕ್ರಿಯೆ ನಡೆವುದು?
ಕಾಲವಿಧಿಯು ವಿಘ್ನರಾಶಿ ತಂದು ಮುಂದೆ ಹೀಗೆ ಇಟ್ಟು
ನಿನ್ನ ನನ್ನ ನೋವಿನಲ್ಲಿ ಏನೊ ಗುರಿಯ ಕಂಡಿದೆ;
ಸ್ವಲ್ಪ ತಾಳು, ಕಾಲಗತಿಯು ನಿನ್ನ ನನ್ನ ಬೆಸೆವವರೆಗೆ,
ಮತ್ತೆ ನೋಡು ನಿನ್ನ ನನ್ನ ಪ್ರೀತಿ ರೀತಿ, ಬೆರೆತ ಮೊರೆತ:
ನಮ್ಮ ಬೆಂಕಿ ಉರಿಯುವಾಗ, ತಿಳಿಯದಂತಾವೇಗದಿಂದ
ಬಯಕೆ ಭರತದಲ್ಲಿ ನಾನು ನಿನ್ನ ಚೆಲುವಿನಾಶೆಯಿಂದ
ತೆಕ್ಕೆ ತುಂಬ ಹಿಡಿದು ನಿನ್ನ, ಮತ್ತೆ ಮತ್ತೆ ಎದೆಗೆ ಒತ್ತಿ,
ತುಟಿಯ ತುಟಿಗೆ ಒತ್ತಿ ಒತ್ತಿ, ಮತ್ತೆ ಮುಖದ ತುಂಬ ಒತ್ತಿ,
ಮೆಲ್ಲ ಮೆಲ್ಲ ಎದೆಗೆ ಇಳಿದು, ನಿನ್ನನನುಭವಿಸುವೆನು, ಚಿನ್ನ;
ಸೆರಗು ಬಿಸುಟು, ಕವಚ ಬಿಚ್ಚಿ, ನೀನು ಬರಿ ಮೈ ನನಗೆ ಕೊಟ್ಟು
ನನ್ನ ಬಿರುಸು ಮೊರೆತದಲ್ಲಿ, ಸುಖದ ಹರಿತ ಹಿಡಿತದಲ್ಲಿ,
ಮತ್ತೆ ಮತ್ತೆ ಒತ್ತಿ ಬಂದು, ಎರಡು ದೇಹ ಬೆರೆಯುವಾಗ,
ಸುತ್ತಿ ಸುತ್ತಿ ನೀನು ಹಿಡಿದು, ಒಳಗೆ ಒಳಗೆ ಸೆಳೆಯುವಾಗ,
ನಿನ್ನ ಪ್ರೀತಿ ಕಣ್ಣಿನಲ್ಲಿ ಬಯಕೆ ಬೆಂಕಿ ಉರಿಯುವಾಗ,
ನಿನ್ನ ಚಿನ್ನ ಮೈಯ ಹೊಳಪು ಕೆಂಪು ಕೆಂಪು ಹೊಳೆಯುವಾಗ,
ಹೇಗೆ ನಾನು ನನ್ನ ಬಯಕೆ ಹಿಡಿತದಲ್ಲಿ ಇಡಲು ಸಾಧ್ಯ?

ಶುದ್ಧ ಹೊಳಪಿನಿಂದ ಹೊಳೆವ ನಿನ್ನ ದೇಹ ಬೆವರು ಧಾರೆ
ನನ್ನಲ್ಲಂಟಿ ಬೆರೆತು ಹೊಸೆದು ನನ್ನಲ್ಲೊಂದಾಯಿತು,
ಮಲ್ಲಿಗೆಯ ಆ ಮಾದಕತೆಯ ನಿನ್ನ ಸಿಹಿ ಮೈಯ ಸ್ವಾದ
ಹೀರಿ ಹೀರಿ ನಾನು ನಿನ್ನ ನನ್ನ ಒಳಗೆ ತುಂಬಿದೆ;
ಮೈಯ ಕೊಟ್ಟು, ನೀ ಕಣ್ಣು ಮುಚ್ಚಿ, ಸುಖದ ಮೇರು ಏರುವಾಗ,
ಎಲ್ಲಿ ಮುಟ್ಟಲಲ್ಲಿ ನಾನು, ನಿನ್ನ ದೇಹ ಕಾದ ಚಿನ್ನ,
ಹಿತದ ನವಿರು ಮಖಮಲ್ಲಿನಂತೆ ಸುಖವ ಕೊಡುವ ಸಾಗರ,
ನನ್ನ ಪ್ರಿಯ ನೀನು ಆಗ ದೇವಲೋಕ ಸುಂದರಿ;
ಮೆಲ್ಲ ಮೆಲ್ಲ ಎಲ್ಲ ತೆರೆದು, ತೆಗೆದು ಬಗೆದು ನೋಡಿದೆ,
ಮುಟ್ಟಿ ಮುಟ್ಟಿ, ತುಟಿಯ ಒತ್ತಿ, ಪ್ರೀತಿಧಾರೆ ಸುರಿಸಿದೆ;
ಹಿತದ ಸುಯಿಲು ಸರಣಿ ಬಿಟ್ಟು, ಒಂದು ಮಾತು ಬೇರೆ ಇಲ್ಲ,
ನನ್ನ ಪ್ರಿಯ ರಾಣಿ ನೀನು ಪೂರ್ಣ ನನ್ನವಳಾದೆಯೆ;
ನೀನು ನಾನು, ನಾನು ನೀನು, ಆಗ ನೋಡು ಬೇರೆಯಲ್ಲ,
ಎರಡು ದೇಹದಲ್ಲಿ ಇರುವ ಒಂದೆ ಆತ್ಮ ಜೀವವು;
ಬಳ್ಳಿಯಂತೆ ಹೊಸೆದು ನಾವು, ಮೇಲೆ ಮೇಲೆ ಬೆಳೆಯಬೇಕು,
ಒತ್ತಿ ಒತ್ತಿ ಕೂಡಿಕೊಂಡು ವಿಶ್ವ ತುಂಬ ಹಬ್ಬಬೇಕು;
ನಿನ್ನ ನನ್ನ ಸೆಳೆತ ಬಂಧ ಕಾಲಾವರ್ತ ಮೀರಿ ನಿಂತ
ಸೃಷ್ಠಿಕ್ರಿಯೆ ಎಂಬ ಸತ್ಯ ನೀನು ನಾನು ಅರಿಯಬೇಕು;
ಎಲ್ಲೆ ಇರಲಿ, ಹೇಗೆ ಇರಲಿ, ನಮ್ಮ ಬಂಧ ನಿರಂತರ.

ಬೆಂಕಿಯಲ್ಲಿ ಉರಿವ ಚಿನ್ನ ಮತ್ತೆ ಮತ್ತೆ ಹೊಳೆಯುವಂತೆ,
ದೂರ ದೂರ ನಿಂತ ನಮ್ಮ ಬಂಧ ಬೆಸುಗೆ ಬಿಗುವುದು,
ಕಾದು ಕಾದು ನಿಂತ ಹಾಗೆ ಪ್ರೀತಿ ಬಂಧ ಹೊಳೆವುದು.

Praveen Kumar in Divya Belaku Comments

Praveen Kumar in Divya Belaku Popularity

Praveen Kumar in Divya Belaku Popularity

Close
Error Success